‘ರಸ್ತೆ ಅಭಿವೃದ್ಧಿಯಿಂದ ಮಾತ್ರ ದೇಶದ ತ್ವರಿತ ಎಳಿಗೆ ಸಾಧ್ಯ ಎಂದು ಬಲವಾಗಿ ನಂಬಿರುವ ಹೆದ್ದಾರಿಗಳ ಸಚಿವ ಗಡ್ಕರಿ ಅವರು ದೇಶದ ಎಲ್ಲ ರಾಜ್ಯಗಳ ಸಂಸದರ ಕ್ಷೇತ್ರಗಳಲ್ಲೂ ಪಕ್ಷ ಭೇದವಿಲ್ಲದೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದಾರೆ. ಅವರ ಕಾರ್ಯಗಳನ್ನು ವಿರೋಧ ಪಕ್ಷದವರೂ ಮೆಚ್ಚಿದ್ದಾರೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ 2018–19ನೇ ಸಾಲಿನ ಕೇಂದ್ರ ಬಜೆಟ್ನ ಮುಖ್ಯಾಂಶಗಳನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.