ಇಷ್ಟು ದಿನ ಕಾನೂನು ವ್ಯವಸ್ಥೆಯನ್ನು ಕದಡುವವರು ಸಮಾಜಘಾತುಕ ವ್ಯಕ್ತಿಗಳು ಮಾತ್ರ ಎಂದು ನಾವೆಂದುಕೊಂಡಿದ್ದೆವು. ಆದರೆ ಕಾಂಗ್ರೆಸ್ ನಾಯಕರುಗಳಾದ ಮೊಹಮ್ಮದ್ ಹ್ಯಾರಿಸ್ ಮತ್ತು ನಾರಾಯಣಸ್ವಾಮಿ ಅವರ ಅಟಾಟೋಪ ನೋಡಿದ ಮೇಲೆ ಇದು ತಪ್ಪು ಗ್ರಹಿಕೆ ಎಂದು ಮನವರಿಕೆಯಾಗಿದೆ.
ಸಮಾಜಘಾತುಕ ವ್ಯಕ್ತಿಗಳ ಸಾಲಿಗೆ ನಾಯಕರುಗಳೇ ಸೇರುತ್ತಿದ್ದಾರೆ. ಆದುದರಿಂದ ಈಗ ‘ನಡೆದಂತೆ ನುಡಿಯುವ’ ಸಿದ್ದ ಸರ್ಕಾರ ಜನರಿಗೆ ಇನ್ನೊಂದು ಭಾಗ್ಯ ನೀಡಬಹುದು. ಅದೇ ‘ಪುಂಡಾಟಿಕೆ ಭಾಗ್ಯ’. ಇದನ್ನು ಪ್ರಕಟಿಸಿದರೆ ಕಾಂಗ್ರೆಸ್ ಸರ್ಕಾರ ತನ್ನ ಮಡಿಲಿಗೆ ಇನ್ನೊಂದು ಗರಿ (ಅಥವಾ ಲಾಂಗ್?) ಸೇರಿಸಲು ಸಾಧ್ಯ.