ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ನೀರು ಪೂರೈಸಲು ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವ ₹1,394 ಕೋಟಿ ಮೊತ್ತದ ‘ಪಶ್ಚಿಮ ವಾಹಿನಿ ಯೋಜನೆ’ಯ ಕಾಮಗಾರಿಗಳನ್ನು ಮಾರ್ಚ್ ಮೊದಲ ವಾರ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಬುಧವಾರ ತಿಳಿಸಿದರು.