ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್, ‘ಕಳೆದ ವರ್ಷದ ಅಭಿಯಾನದ ಸಲಹೆಗಳ ಪೈಕಿ ಶೇ 22ರಷ್ಟು ಸಲಹೆಗಳು ಬಜೆಟ್ನಲ್ಲಿ ಸೇರ್ಪಡೆಯಾಗಿದ್ದವು. ಆಯಾ ವಾರ್ಡ್ನ ಕಾಮಗಾರಿಗಳಲ್ಲಿ ಇವುಗಳನ್ನು ಸೇರಿಸಿ ಅನುಷ್ಠಾನಗೊಳಿಸಲಾಗಿತ್ತು. ರಸ್ತೆ ದುರಸ್ತಿ, ಕಸ ತೆರವುಗೊಳಿಸುವ ಸಲಹೆಗಳೇ ಹೆಚ್ಚಾಗಿ ಬಂದಿದ್ದವು. ಒಂದೇ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚು ಮಂದಿ ನೀಡಿದ್ದ ಸಲಹೆಗಳನ್ನು ಪರಿಗಣಿಸಲಾಗಿದೆ’ ಎಂದರು.