ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಶೇ 7ರಷ್ಟು ಅಪರಾಧ ಪ್ರಮಾಣವನ್ನು ಶೇ 5ಕ್ಕೆ ಇಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಟ್ವೀಟಿಸಿದ್ದಾರೆ.
‘ಹೋದಲ್ಲೆಲ್ಲ ಬೆಂಗಳೂರು ಎಂದರೆ ಗೂಂಡಾ ವಿಷಯ, ನೈಟ್ಕ್ಲಬ್ ಜೂಜಾಟ, ಮಾದಕ ದ್ರವ್ಯ ಸರಬರಾಜು ಜಾಲ.. ಎಂಬುದೇ ಮಾತು. ಈ ಕುರಿತು ಏನು ಕ್ರಮ ತೆಗೆದುಕೊಳ್ಳುತ್ತೀರಿ’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮಂಗಳವಾರ ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು.
ಕೆಲ ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಹಲ್ಲೆಯಂತಹ ಪ್ರಕರಣಗಳು ದೇಶ ಮಟ್ಟದಲ್ಲಿ ಬೆಂಗಳೂರಿನ ಹೆಸರನ್ನು ಕೆಡಿಸಿವೆ . ಹೋದಲ್ಲೆಲ್ಲ ಬೆಂಗಳೂರು ಎಂದರೆ ಅದೇ ಗೂಂಡಾ ವಿಷಯ . ಇಲ್ಲಿ ಪರವಾನಿಗೆ ಇಲ್ಲದೆ ನಡೆಯುತ್ತಿರುವ ಸ್ಕಿಲ್ ಗೇಮ್ ಅಡ್ಡೆಗಳು , ನೈಟ್ ಕ್ಲಬ್ ಗಳು,ಜೂಜಾಟದ ಕೇಂದ್ರ,ಮಾದಕ ದ್ರವ್ಯ ಸರಬರಾಜು ಜಾಲಗಳು , Sri @RLR_BTM 1/3