ಕುವೆಂಪು ಅವರು ಕರ್ನಾಟಕವನ್ನು ‘ಸರ್ವ ಜನಾಂಗದಶಾಂತಿಯ ತೋಟ’ ಎಂದಿದ್ದರು. ನಮ್ಮ ರಾಜ್ಯ ಆಗ ಹಾಗೆಯೇ ಇತ್ತು. ಆದರೆ ಈಗ ಒಂದೊಂದು ಜನಾಂಗದವರದೂ ಒಂದೊಂದು ‘ಜಾತಿಯ ತೋಟ’. ಒಂದೊಂದು ಜಾತಿಗೂ ಒಬ್ಬ ಸ್ವಾಮೀಜಿ. ಒಬ್ಬೊಬ್ಬ ಸ್ವಾಮೀಜಿಗೂ ರಾಜಕೀಯ ಪಕ್ಷಗಳೊಂದಿಗೆ, ರಾಜಕಾರಣಿಗಳೊಂದಿಗೆ ಸಂಬಂಧ. ಇದರಿಂದಾಗಿ ಕರ್ನಾಟಕದಲ್ಲೀಗ ‘ಜಾತಿ’ಯೇ ಕುಣಿದಾಡುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಜಾತಿ, ಮಂತ್ರಿಯಾಗಲು ಜಾತಿ, ಪಕ್ಷದ ಮುಖಂಡನಾಗಲು ಜಾತಿ, ಅಷ್ಟೇ ಅಲ್ಲ ಮುಖ್ಯಮಂತ್ರಿಯಾಗಲು ಸಹ ಜಾತಿ ಲೆಕ್ಕಾಚಾರ.