ನಿವಾಸದ ಎರಡು ಅಂತಸ್ತನಿಂದ ಕೂಡಿದ್ದು, ಕೆಳ ಅಂತಸ್ತಿನಲ್ಲಿ ಬೃಹತ್ ಅಡುಗೆ ಕೋಣೆ ಮತ್ತು ದೊಡ್ಡ ಹಜಾರವಿದೆ. ಹರಕೆ ತೀರಿಸಲು ದೂರದ ಊರುಗಳಿಂದ ಬರುವ ಭಕ್ತರು ಹಾಗೂ ಸ್ಥಳೀಯರು ಈಗಲೂ ದೇವಾಲಯದ ತೆರೆದ ಆವರಣದಲ್ಲಿ ಪೆಂಡಾಲ್ ಹಾಕಿ ಅಡುಗೆ ತಯಾರಿಸುವ ಸನ್ನಿವೇಶ ಬದಲಾಗಿಲ್ಲ. ಬಾಗಿಲು ಹಾಕಿದ ಯಾತ್ರಿನಿವಾಸದ ಮುಂಭಾಗದ ಆವರಣದಲ್ಲಿ, ಕೇಂದ್ರ ಕಾರಾಗೃಹದ ರಸ್ತೆ ಬದಿಯಲ್ಲೇ ಅಡುಗೆ ತಯಾರಿಸಬೇಕಾಗಿದೆ. ಇದರಿಂದ ಈ ಪ್ರದೇಶದಲ್ಲಿ ಹಂದಿ ಮತ್ತು ನಾಯಿಗಳ ಉಪಟಳವೂ ಹೆಚ್ಚಾಗಿದೆ.