ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಹಣೆಪಟ್ಟಿ ಬರೆಸಿಕೊಂಡ ವಿಧಾನಸೌಧದ ಪರಿಸರ ಒಮ್ಮೆಗೇ ದೈವಿಕ ಕಳೆಯನ್ನು ಆವಾಹಿಸಿಕೊಂಡಂತಿತ್ತು. ನಂತರದ್ದು ಲೇಸರ್ ಅಲೆಗಳ ನೆಳಲು ಬೆಳಕಿನ ಬಳುಕಾಟ. ಕೃತಕ ನೆಳಲು ಬೆಳಕನ್ನು ನಾಚಿಸುವಂತೆ ನಡೆದದ್ದು ನೃತ್ಯದ ಭರ್ಜರಿ ಪ್ರದರ್ಶನ. ಹಲವು ನೃತ್ಯಪ್ರಕಾರಗಳನ್ನು ಕಸಿ ಮಾಡಿ ಮಾಧುರಿ ಹಾಗೂ ಮಯೂರಿ ಉಪಾಧ್ಯ ಸಂಯೋಜಿಸಿದ್ದ ನೃತ್ಯಪ್ರದರ್ಶನ ಇರುಳಿನಲ್ಲಿ ಸ್ವಪ್ನಲೋಕವನ್ನು ಸೃಜಿಸುವಷ್ಟು ಪರಿಣಾಮಕಾರಿ ಯಾಗಿತ್ತು. ಈ ಕಾರ್ಯಕ್ರಮಗಳು ಸಿನಿಮೋತ್ಸವಕ್ಕೆ ಅರ್ಥಪೂರ್ಣ ಮುನ್ನುಡಿ ಬರೆಯುವಂತಿದ್ದವು.