‘ಜೀವನದಲ್ಲಿ ನಾವು ಸಾಯುವ ತನಕ ಕಲಿಯುವುದು ಬೇಕಾದಷ್ಟಿದೆ. ಅಸೂಯೆ, ಕಲಹ ನಮ್ಮನ್ನು ಸರ್ವನಾಶ ಮಾಡುತ್ತದೆ. ಅವುಗಳನ್ನು ತ್ಯಜಿಸಿ ಪರೋಪಕಾರ, ಕರುಣೆ, ಸಹಾನುಭೂತಿ, ಪ್ರಿಯವಾದ ಮಾತುಗಾರಿಕೆ ಇತ್ಯಾದಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ನಡೆ, ನುಡಿಯಲ್ಲಿ ಆದರ್ಶನೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಬದುಕು ಸಾಧಿಸಬೇಕು’ ಎಂದರು. ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆ ಅಧ್ಯಕ್ಷ ಕೆ.ಟಿ.ಮಂಜುನಾಥ್, ಪದಾಧಿಕಾರಿಗಳಾದ ಸಂದೇಶ್, ರಾಘವೇಂದ್ರ ಹಾಜರಿದ್ದರು.