ಅಥಣಿ: ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಸವಣ್ಣನವರ ವಚನವನ್ನೋದಿ ಭಾಷಣ ಆರಂಭಿಸಿದ್ದರು. ಬಸವಣ್ಣನವರು ‘ನುಡಿದಂತೆ ನಡೆ’ ಎಂದಿದ್ದರು. ವಚನದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಿದೆ. ನಾವು ಅದೇ ರೀತಿ ನಡೆದಿದ್ದೇವೆ. ಆದರೆ ಬಸವಣ್ಣನವರ ವಚನ ಬಳಸುವ ಮೋದಿ ನುಡಿದಂತೆ ನಡೆದಿಲ್ಲ ಎಂದು ರಾಹುಲ್, ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್
</p><p>ಇವನಾರವ ಇವನಾರವ ಇವನಾರವ....<br/> ಇವ ನಮ್ಮವ, ಇವ ನಮ್ಮವ... ಎಂಬ ಬಸವಣ್ಣನ ವಚನವನ್ನು ರಾಹುಲ್ ವಾಚಿಸಿದ್ದು, ಭಾಷಣದ ಈ ತುಣುಕು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.</p></p>