ನಿರ್ಮಾಪಕ ಕುಮಾರ್ ಎನ್. ಭದ್ರಾವತಿ, ‘ಚಿತ್ರದಲ್ಲಿ ತಾಂತ್ರಿಕ ವರ್ಗದ ಶ್ರಮ ಹೆಚ್ಚಿದೆ. ಟ್ರೇಲರ್ ನೋಡಿದರೆ ಇದು ಅರ್ಥವಾಗುತ್ತದೆ’ ಎಂದು ಹೊಗಳಿದರು.ಟ್ರೇಲರ್ ಅನ್ನು ಬಿಡುಗಡೆಗೊಳಿಸಿದ ಹಿರಿಯ ನಟ ದೊಡ್ಡಣ್ಣ, ‘ಚಿತ್ರರಂಗಕ್ಕೆ ಹೊಸಬರ ಪ್ರವೇಶವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆರಂಭದಲ್ಲಿ ನಿರೀಕ್ಷೆಗಳು ಹೆಚ್ಚಿರುತ್ತವೆ. ಆದರೆ, ವೃತ್ತಿಬದುಕಿನಲ್ಲಿ ಯಶಸ್ಸುಗಳಿಸಲು ಸಹನೆ ಮುಖ್ಯ’ ಎಂದು ಸಲಹೆ ನೀಡಿದರು.