ಅವರು ತರಗತಿಯಲ್ಲಿ ಮಹಾಭಾರತದ ಪಾತ್ರಗಳನ್ನು ಮನೋಜ್ಞವಾಗಿ ಪರಿಚಯಿಸುತ್ತಿದ್ದರು. ಅವರ ಪಾಠ ಇಂದಿಗೂ ಮನಸ್ಸಿನಲ್ಲಿ ನೆಲೆನಿಂತಿದೆ. ಮಹಾಭಾರತದ ಪರ್ವಗಳು, ಭೀಷ್ಮ, ವೇದವ್ಯಾಸ ಭಾರತ, ಕುಮಾರವ್ಯಾಸ ಭಾರತ ಮುಂತಾದ ಪುಸ್ತಕಗಳನ್ನು ಓದುವಂತೆ ಮಾಡಿದ್ದೂ ಅವರ ಕಥನ ಶೈಲಿಯೇ. ಕನ್ನಡ ವ್ಯಾಕರಣವನ್ನು ಸರಳವಾಗಿ ಅರ್ಥ ಮಾಡಿಸುತ್ತಿದ್ದ ರೀತಿಯಂತೂ ಅಮೋಘವಾಗಿತ್ತು.