‘ಜಾತೀಯತೆ, ಕೋಮುವಾದಗಳು ಮಹಾನ್ ಪಿಡುಗುಗಳು. ಅವುಗಳು ಇಲ್ಲವಾಗಿದ್ದರೆ, ನಾವು ಇನ್ನೂ ಚೆನ್ನಾಗಿ ಇರುತ್ತಿದ್ದೆವು. ಬುದ್ಧ, ಬಸವ, ಅಂಬೇಡ್ಕರ್ ಎಂದು ನಾವು ಚಂದಕ್ಕೆ ಹೇಳುವುದಿಲ್ಲ. ಬಸವಣ್ಣನಿಗೆ ಬುದ್ಧ ಹಾದಿ ಮಾಡಿ ಕೊಟ್ಟ, ಅಂಬೇಡ್ಕರ್ಗೆ ಬಸವಣ್ಣ ಅನುವು ಮಾಡಿಕೊಟ್ಟ. ನಮ್ಮ ಇಡೀ ಪರಂಪರೆಯಲ್ಲಿ ವೈಚಾರಿಕ ಎಳೆ ಇದೆ’ ಎಂದರು.