ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ಹಾಲಿ ವಾಸ ಇರುವವರಿಗೆ ಈಗಾಗಲೇ ನೀಡಿರುವ ಸಂಖ್ಯೆ ಪ್ರಕಾರ ಪಟ್ಟಿ ತಯಾರಿಸಿ, ಆಯಾಯ ಮನೆಯ ಅನುಭೋಗದ ಪತ್ರ ಕೊಡಿಸುವುದರ ಜೊತೆಗೆ ಸರ್ವೆ ನಂ. 23, 31, 32 ಮತ್ತು 33, 34 ರಲ್ಲಿ ಸುಮಾರು 150 ಎಕರೆ ಸರ್ಕಾರಿ ಗೋಮಾಳವಿದೆ. 1970 ರ ದಶಕದಿಂದಲೂ ಗ್ರಾಮಸ್ಥರು ಉಳುಮೆ ಮಾಡುತ್ತಿದ್ದಾರೆ. ಆದರೆ, ಅನೇಕರ ಬಳಿ ಜಮೀನಿಗೆ ಸಂಬಂಧಿಸಿದ
ದಾಖಲೆಗಳು ಇಲ್ಲದ ಕಾರಣ, ಹೊಸದಾಗಿ ಸರ್ವೆ ಕಾರ್ಯ ಮಾಡಿಸಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಹೇಳಿದರು.