‘ಸಂಡಾಸು ಊರ ಆಚೆ ಇರ್ಬೇಕು ಅನ್ನುತ್ತಿದ್ದ ಜನರು, ಮನಸ್ಸು ಬದಲಾಯಿಸಿಕೊಂಡು ಶೌಚಾಲಯಕ್ಕೆ ಅರ್ಜಿ ಹಾಕುತ್ತಿದ್ದಾರೆ. ಇಂಥದ್ರಲ್ಲಿ ನೀವು ಅರ್ಜಿ ವಿಲೇವಾರಿ ಏಕೆ ಮಾಡಿಲ್ಲ. ಜನರು ‘ಸಂಡಾಸು ಕರಾರುಪತ್ರ’ಕ್ಕಾಗಿ ಕೋರ್ಟ್ ಆವರಣ ಅಲೆಯುವಂತೆ ಮಾಡಿದ್ದೀರಿ. ಸರ್ಕಾರ ಕೊಟ್ಟಿರುವ ₹ 3 ಕೋಟಿ ‘ಸಂಡಾಸು ಅನುದಾನ’ದಲ್ಲಿ ಬರೀ ₹ 40 ಲಕ್ಷ ಅಷ್ಟೇ ಖರ್ಚ್ ಮಾಡೀರಿ’ ಎಂದು ಸರ್ವ ಸದಸ್ಯರು ಪೌರಾಯುಕ್ತರ ವಿರುದ್ಧ ರೇಗಿದರು.