ಕನಕಪುರ: ನಗರದ ಎಸ್.ಕರಿಯಪ್ಪ ರಸ್ತೆಯಲ್ಲಿನ ಶನೇಶ್ವರ ಮತ್ತು ಈಶ್ವರ ದೇವಾಲಯದ 15ನೇ ವಾರ್ಷಿಕೋತ್ಸವ ಸಮಾರಂಭ ಭಕ್ತರ ಸಮ್ಮುಖದಲ್ಲಿ ಸೋಮವಾರ ನಡೆಯಿತು.
ಭಾನುವಾರ ಸಂಜೆ ಶನೇಶ್ವರಸ್ವಾಮಿ, ಛಾಯಾದೇವಿ ಮತ್ತು ಬಾಣಂತಮರಾಮ್ಮ ದೇವಿಯನ್ನು ನಗರದ ದೇಗುಲ ಮಠದಿಂದ ಎಸ್.ಕರಿಯಪ್ಪ ರಸ್ತೆಯಲ್ಲಿನ ದೇವಾಲಯಕ್ಕೆ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಸೋಮವಾರ ಬೆಳಿಗ್ಗೆ ಗಣಪತಿ ಹೋಮ, ನವಗ್ರಹ ಶಾಂತಿ ಯೊಂದಿಗೆ ಮಹಾ ಮಂಗಳಾರತಿ ಮಾಡಲಾಯಿತು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಅರ್ಚಕ ಪ್ರಕಾಶ ಅವರು ವಿಶೇಷ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.