ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕನ ಸಮಯಪ್ರಜ್ಞೆ ತಪ್ಪಿದ ರೈಲು ದುರಂತ

Last Updated 10 ಮಾರ್ಚ್ 2018, 7:04 IST
ಅಕ್ಷರ ಗಾತ್ರ

ಹೊಳೆನರಸೀಪುರ: ಎರಡು ರೈಲುಗಳು ಒಂದೇ ಪ್ಲಾಟ್ ಫಾರಂಗೆ ಬಂದಿದ್ದು, ಒಂದು ರೈಲಿನ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಮೈಸೂರು– ಅರಸೀಕೆರೆ ಹಾಗೂ ಅರಸೀಕೆರೆ– ಮೈಸೂರು ರೈಲುಗಳು ಹೊಳೆನರಸೀಪುರ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್‌ಗೆ ಬಂದಿವೆ. ಆದರೆ ಗೇಟ್‌ ಹಾಕಿದ್ದು ಗಮನಿಸಿದ ಅರಸೀಕೆರೆ– ಮೈಸೂರು ರೈಲಿನ ಚಾಲಕ ಪಟ್ಟಣದ ಹೊರವಲಯದಲ್ಲಿಯೇ ರೈಲು ನಿಲ್ಲಿಸಿದ್ದಾರೆ.

ಮೈಸೂರಿನಿಂದ ಹೊರಟಿದ್ದ ರೈಲು 2ನೇ ಪ್ಲಾಟ್‌ಫಾರ್ಮ್‌ಗೆ ಬರಬೇಕಿತ್ತು. ಆದರೆ ಒಂದನೇ ಪ್ಲಾಟ್ ಫಾರ್ಮ್‌ಗೆ ಬಂದಿದೆ. ಅರಸೀಕೆರೆ– ಮೈಸೂರು ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ನಂತರ ಸಮಸ್ಯೆ ಸರಿಪಡಿಸಲಾಯಿತು. ಮೈಸೂರು– ಅರಸೀಕೆರೆ ರೈಲು ಚಾಲಕನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT