ನರಸಿಂಹ ಸ್ವಾಮಿ ಅವರು ಸಮಯದ ಒಳಗಣ್ಣು ತೆರೆಸುವ ಕಾರ್ಯ ಮಾಡಿದ್ದರು. ಕೌಟುಂಬಿಕ ಪರಿಕಲ್ಪನೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅದೇ ಮಾರ್ಗದಲ್ಲಿ ಟ್ರಸ್ಟ್ ಸಾಗುತ್ತಿದೆ. ವಸಂತೋತ್ಸವದ ಮಾದರಿಯಲ್ಲೇ ರೈತೋತ್ಸವ ಕೂಡ ಆಯೋಜಿಸುವ ಚಿಂತನೆಯಿದೆ ಎಂದು ಹೇಳಿದರು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಟ್ರಸ್ಟ್ ಖಜಾಂಚಿ ಕೆ.ಜೆ. ನಾರಾಯಣ, ಸದಸ್ಯ ರವಿಕುಮಾರ, ಶ್ರೀನಿವಾಸ ಉಡುಪ, ಜಾವಗಲ್ ಪ್ರಸನ್ನಕುಮಾರ, ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ ಇದ್ದರು.