ಕಾಂಗ್ರೆಸ್ ನಾಯಕ ಶಿವರಾಜ್, ‘ಬೆಂಗಳೂರು ರಕ್ಷಿಸಿ ಎಂದು ಸುಳ್ಳು ಚಾರ್ಜ್ಶೀಟ್ ಹಾಕಿರುವ ನೀವು ‘ನಿಮ್ಮಪ್ಪನಾಣೆ’ಗೂ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಈ ಚಾರ್ಜ್ಶೀಟ್ಗೆ ಜನರೇ ಬಿ– ರಿಪೋರ್ಟ್ ಕೊಡುತ್ತಾರೆ’ ಎಂದು ವಿರೋಧ ಪಕ್ಷ ಬಿಜೆಪಿಯ ಕಾಲೆಳೆಯಲು ಪ್ರಯತ್ನಿಸಿದರು. ಬಿಜೆಪಿ ಸದಸ್ಯರಾದ ಉಮೇಶ್ ಶೆಟ್ಟಿ, ಡಾ.ರಾಜು ಮತ್ತಿತರರು, ‘ನಿಮಗೆ ತಾಕತ್ತು ಇದ್ದರೆ ನಿಮ್ತಾಯಾಣೆ, ನಿಮ್ಮಪ್ಪನಾಣೆ ಮಾಡಿಕೊಳ್ಳಿ... ನಮ್ಮಪ್ಪನ ಆಣೆ ಹಾಕಬೇಡಿ’ ಎಂದು ವಾಕ್ಸಮರಕ್ಕೆ ನಿಂತರು.