ಸ್ಥಳೀಯ ನಿವಾಸಿಯಾದ ಆರೋಪಿ, ಕಾಲೇಜಿಗೆ ಸೇರಿದಾಗಿನಿಂದಲೂ ಸಂತ್ರಸ್ತೆಯನ್ನು ಕಾಡಿಸುತ್ತಿದ್ದ. ಶನಿವಾರ ಮಧ್ಯಾಹ್ನ ತರಗತಿ ಮುಗಿದ ಬಳಿಕ ಯುವತಿಯೊಬ್ಬಳೇ ಓದುತ್ತ ಕುಳಿತುಕೊಂಡಿದ್ದಳು. ಅದನ್ನು ಗಮನಿಸಿ ಆರೋಪಿ ಮುತ್ತು ಕೊಟ್ಟಿದ್ದ. ನಂತರ ಯುವತಿ, ಅಳುತ್ತಲೇ ಪ್ರಾಂಶುಪಾಲರ ಬಳಿ ಹೋಗಿ ಅಳಲು ತೋಡಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದರು.