ರಾಗಿಮೆದೆ ಬೆಂದು ಹೋಗಿದೆ. ಎರಡು ಎಕರೆ ಭೂಮಿಯಲ್ಲಿ ಲಕ್ಷ್ಮಮ್ಮ ಕಷ್ಟಪಟ್ಟು ಸಾಲ ಮಾಡಿ ಬೆಳೆದಿದ್ದ ಮೆದೆಗೆ ದುಷ್ಕರ್ಮಿಗಳ ಬೆಂಕಿ ಇಟ್ಟ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಆದರೂ ರಾಗಿಮೆದೆ ಭಾಗಶಃ ಬೆಂದುಹೋಗಿದೆ. ಇದರಿಂದ ಅವರ ಕುಟುಂಬಕ್ಕೆ ನಷ್ಟವಾಗಿದೆ. ಸಾಲವನ್ನು ತೀರಿಸುವುದು ಕಷ್ಟ. ಇಂತ ಸಮಯದಲ್ಲಿ ಬೆಂಕಿ ಬಿದ್ದಿರುವುದು ನೋವಿನ ಸಂಗತಿ ಎಂದರು.