21ನೇ ಶತಮಾನದ ಪ್ರಜಾಪ್ರಭುತ್ವದ ಸಂದರ್ಭದಲ್ಲಿಯೇ ಇಂಥ ಪರಿಸ್ಥಿತಿ ಇರುವಾಗ, 12ನೇ ಶತಮಾನದ ರಾಜಾಳ್ವಿಕೆಯ ಸಂದರ್ಭದಲ್ಲಿ ಈ ಧರ್ಮ ಮೇಲಾಟ ಹೇಗಿದ್ದಿರಬಹುದು ಎಂಬುದು ಊಹೆಗೂ ನಿಲುಕದು. ‘ಬಸವಾದಿ ಲಿಂಗಾಯತ ಶಿವಶರಣರ ಪ್ರಗತಿಪರ ಧೋರಣೆಯಿಂದ ವರ್ಣ ಸಂಕರವಾಗಿ, ಸನಾತನ ಧರ್ಮಕ್ಕೆ ಅಪಚಾರವಾಗುತ್ತದೆ’ ಎಂದು ಹುಯಿಲೆಬ್ಬಿಸಿದ ಸನಾತನ ವಾದಿಗಳ ಹಾಗೂ ಶರಣರ ಸಂಘರ್ಷದಲ್ಲಿ ಕಲ್ಯಾಣನಗರ ಹೊತ್ತಿ ಉರಿಯಿತು. ಕಡೆಗೆ ಅದು ದೊರೆ ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನವಾದದ್ದೂ, ಸನಾತನ ಧರ್ಮೀಯರ ಹಿತಾಸಕ್ತಿಯೇ ಮತ್ತೆ ಮೇಲುಗೈ ಪಡೆದದ್ದೂ ಈಗ ಇತಿಹಾಸ.