ಉಕ್ಕಿಬಂದ ದುಃಖ
ಬೆಂಗಳೂರು, ಮಾ. 15– ಎರಡು ತಿಂಗಳ ಹಿಂದೆ ನಡೆದ ತಮ್ಮ ಬಂಧು ಒಬ್ಬರ ಆಕಸ್ಮಿಕ ಮರಣದ ಬಗ್ಗೆ ಪೋಲೀಸರು ‘ಇನ್ನೂ ಏನೂ ಮಾಡಿಲ್ಲ’ ಎಂದು ಟೀಕಿಸಿದ ಸದಸ್ಯರೊಬ್ಬರು ಇಂದು ವಿಧಾನಪರಿಷತ್ತಿನಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಕಾಂಗ್ರೆಸ್ ಸದಸ್ಯ ಶ್ರೀ ನಂದೀಶ್ರವರು ಆಯವ್ಯಯ ಅಂದಾಜಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಪೋಲೀಸ್ ಇಲಾಖೆ ಬಗ್ಗೆ ಪ್ರಸ್ತಾಪಿಸಿದರು.