ನಗರದ ದೇಗುಲಮಠದಲ್ಲಿ ಗುರುವಾರ ಏರ್ಪಡಿಸಿದ್ದ ಉತ್ತರಾಧಿಕಾರಿ (ವಟು) ನೇಮಕ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗೈಕ್ಯ ಮುಮ್ಮಡಿ ಮಹಾಲಿಂಗಸ್ವಾಮೀಜಿ ಮಠದ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದರು. ಆದರೆ, ಅವರ ಅಕಾಲಿಕ ಮರಣದಿಂದ ಮಠಕ್ಕೆ ಆಡಳಿತಾತ್ಮಕವಾಗಿ ಹಿನ್ನಡೆಯಾಗಿತ್ತು. ಮಠಕ್ಕೆ ಸೂಕ್ತ ವ್ಯಕ್ತಿ ಬೇಕೆಂದು ಪರಿಶೀಲನೆ ನಡೆಸುತ್ತಿದ್ದಾಗ ಶಶಿಕುಮಾರ ಸೂಕ್ತರಾಗಿ ಕಂಡು ಬಂದರು ಎಂದು ಹೇಳಿದರು.