‘ಬಿಜೆಪಿಯವರಿಗೆ ಸಂವಿಧಾನ ಗೊತ್ತಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ. ಆಡಳಿತ ಪಕ್ಷದವರಂತೆ ಬಿಜೆಪಿಯವರೂ ಪ್ರಜಾಸತ್ತಾತ್ಮಕವಾಗಿ ಜನರಿಂದಲೇ ಆರಿಸಿ ಬಂದವರು. ಆಡಳಿತ ಪಕ್ಷ ದಾರಿ ತಪ್ಪಿದಾಗ ಎಚ್ಚರಿಸುವ ಜವಾಬ್ದಾರಿ ಬಿಜೆಪಿಯವರಿಗೆ ಇದೆ.
ಸರ್ಕಾರ ನೀಡುವ ಸಂಬಳ– ಸವಲತ್ತುಗಳನ್ನು ಪಡೆದು, ಜನರು ನೀಡಿರುವ ಹೊಣೆಯನ್ನು ನಿರ್ವಹಿಸಬೇಕಾದವರು ವಿರೋಧ ಪಕ್ಷದ ಬಿಜೆಪಿಯವರು. ಈ ಸಾಮಾನ್ಯ ಜ್ಞಾನವೂ ಇಲ್ಲದೆ ಕಾನೂನು, ಸಂವಿಧಾನಗಳನ್ನು ಗುತ್ತಿಗೆ ಹಿಡಿದವರಂತೆ ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರ ನಡೆ ಹಾಸ್ಯಾಸ್ಪದ.