‘ಉತ್ತರ ಕರ್ನಾಟಕಕ್ಕೆ ಸೇರಿದ ಈ ಜಿಲ್ಲೆಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ರಾಜ್ಯಗಳು ಚಿಕ್ಕದಾಗಿದ್ದಷ್ಟೂ ಅಭಿವೃದ್ಧಿಗೆ ಆದ್ಯತೆ ದೊರಕುತ್ತದೆ ಎಂದು ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿಪಾದಿಸಿದ್ದ ಎನ್ಡಿಎ ಮೈತ್ರಿಕೂಟವೇ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಹೀಗಾಗಿ, ಕೂಡಲೇ ಪ್ರತ್ಯೇಕ ರಾಜ್ಯಕ್ಕೆ ಕ್ರಮ ವಹಿಸಬೇಕು’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.