ಸಂಜೆ 7ರ ಸುಮಾರಿಗೆ ಏಕಾಏಕಿ ದಾಳಿ ನಡೆಸಿದ ಅವರು, ಅಂಗಡಿ ಮಾಲೀಕ ಕೆ.ಎಂ. ವೀರೇಶ್ ಅವರಿಂದಪರವಾನಗಿ ಪತ್ರ ತೋರಿಸುವಂತೆ ಕೇಳಿದರು. ಅಬಕಾರಿ ಇಲಾಖೆಯಿಂದ ಪಡೆದಿರುವ ಪರವಾನಗಿ ಪತ್ರ ತೋರಿಸಿದರು. ಆದರೆ, ನಗರಸಭೆಯಿಂದ ಪರವಾನಗಿ ಪಡೆದಿರಲಿಲ್ಲ. ಹಾಗಾಗಿ ಅಧಿಕಾರಿಗಳಿಂದ ಅಂಗಡಿ ಮುಚ್ಚಿಸಿ, ಅದಕ್ಕೆ ಬೀಗ ಮುದ್ರೆ ಹಾಕಿಸಿದರು.