ಸೋಮವಾರಪೇಟೆ: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಹೇಂದ್ರಕುಮಾರ್ ಪರಿಶೀಲಿಸಿದರು.
‘ತಣ್ಣೀರುಹಳ್ಳ ಗ್ರಾಮದಲ್ಲಿ ಎಸ್ಇಪಿ ಯೋಜನೆಯಡಿ ₹ 10 ಲಕ್ಷ ವೆಚ್ಚದಲ್ಲಿ ಎರಡು ರಸ್ತೆಗಳ ಕಾಂಕ್ರೀಟೀಕರಣ ನಡೆಯುತ್ತಿದ್ದು, ಇದಕ್ಕೆ ಬಳಸುತ್ತಿರುವ ಸಾಮಗ್ರಿಗಳು ಕಳಪೆಯಾಗಿದೆ.
ಬಾಣಾವರ ಕಲ್ಲುಕೋರೆಯಿಂದ ನಿರುಪಯುಕ್ತವಾಗಿರುವ ಕಲ್ಲಿನ ಪುಡಿಯನ್ನು ತಂದು ವೆಟ್ಮಿಕ್ಸ್ ಎಂದು ರಸ್ತೆಗೆ ಹಾಕಲಾಗುತ್ತಿದೆ’ ಎಂದು ಆರೋಪಿಸಿದ ಗ್ರಾಮಸ್ಥರು, ತಕ್ಷಣ ಈ ಸಾಮಗ್ರಿಗಳನ್ನು ತೆರವುಗೊಳಿಸ ಬೇಕೆಂದು ಒತ್ತಾಯಿಸಿದ್ದರು.