ಬಡವರು, ನಿರ್ಗತಿಗರು, ಶೋಷಿತರು, ಅರಣ್ಯ ವಾಸಿಗಳ ಪರವಾಗಿ ಧ್ವನಿ ಎತ್ತುವ, ಕಾಡಿನಲ್ಲೇ ವಾಸವಿದ್ದು ಅವರಲ್ಲಿ ಜಾಗೃತಿ ಮೂಡಿಸುವ ಹೋರಾಟಗಾರರ ವಿರುದ್ಧ ನಿರಂತರ ಪ್ರಕರಣ ದಾಖಲಿಸಲಾಯಿತು. ಜೀವನವಿಡೀ ಕೋರ್ಟ್ಗೆ ಅಲೆದಾಡುವಂತೆ ಮಾಡಲಾಯಿತು ಎಂದು ನಕ್ಸಲ್ ಹಣೆಪಟ್ಟಿ ಹೊತ್ತುಕೊಂಡಿದ್ದ ದಿನಗಳ ಘಟನೆಗಳನ್ನು ಬಿಚ್ಚಿಟ್ಟರು.