ವಿಜಯಪುರ: ‘ನಾ ಸೂಕ್ಷ್ಮವಾಗಿ ಗಮನಿಸಾಕತ್ತೀನಿ, ನನ್ನ ಗಮನಕ್ಕ ಬಾರದೇ ನಮ್ ವಾರ್ಡ್ನಾಗ ಅಭಿವೃದ್ಧಿ ಕೆಲಸಗಳು ನಡೀತಾವು. ಯಾಕೋ ನಂಗ ಈಚೆಗೆ ಬಲವಾದ ಅನುಮಾನ ಕಾಡಕತ್ತೈತಿ, ನಮ್ ಕಮಿಷನರ್ ನನ್ ವಾರ್ಡ್ನಿಂದಲೇ ಎಲೆಕ್ಷನ್ಗೆ ನಿಲ್ಲೋ ತಯಾರಿ ನಡೆಸ್ಯಾರೇನು?... ನೋಡಪ್ಪಾ ನೀ ಎಲೆಕ್ಷನ್ಗೆ ನಿಲ್ಲೋದಿದ್ರೇ ಹೇಳು. ಸುಮ್ನೇ ಯಾಕ ಕಾರ್ಪೊರೇಟರ್ ಆಗಾಕ ಬಡಿದಾಡ್ತಿ. ನಮ್ ಸದಸ್ಯರನ್ನೆಲ್ಲಾ ಒಪ್ಸಿ, ನಿನ್ನೇ ಸಿಟಿಗೆ ಎಂಎಲ್ಎ ಎಲೆಕ್ಷನ್ಗೆ ನಿಲ್ಲಸ್ತೀನಿ...’