ಇಲ್ಲಿ ಇಳಿಯಬೇಕಾಗಿದ್ದ ಎಂಟು ವಿಮಾನಗಳನ್ನು ಚೆನ್ನೈಗೆ, ತಿರುಚನಾಪಳ್ಳಿ ಹಾಗೂ ಕೊಯಮತ್ತೂರಿಗೆ ತಲಾ ಒಂದು ವಿಮಾನವನ್ನು ಕಳುಹಿಸಿಕೊಡಲಾಯಿತು. ಇಳಿಯುತ್ತಿದ್ದಂತೆಯೇ ವಿಮಾನ ಎಡಕ್ಕೆ ವಾಲಿತು. ಅದನ್ನು ರನ್ವೇಯ ಮಧ್ಯಕ್ಕೆ ತರುವಲ್ಲಿ ಪೈಲಟ್ ಯಶಸ್ವಿಯಾದರು. ಅಷ್ಟರಲ್ಲಿ ದೀಪಗಳಿಗೆ ಹಾನಿಯಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು ಎಂದು ಸ್ಪೈಸ್ಜೆಟ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ.