ದಡದಹಳ್ಳಿ, ಕೆಸ್ತೂರು, ಸಿದ್ದಯ್ಯನ ಪುರ, ಬಸ್ತೀಪುರ, ಚಂಚಹಳ್ಳಿ, ಮಂಗೀಹುಂಡಿ ಸೇರಿದಂತೆ ಹಲವಾರು ಗ್ರಾಮದ ಗುಡ್ಡರು ಪಾದಯಾತ್ರೆ ಮೂಲಕ ತಾಲ್ಲೂಕುಗಳ ಪ್ರತಿ ಗ್ರಾಮದ ದೇವರ ಗುಡ್ಡರ ಮನೆಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಅವರಿಂದ ಕಾಣಿಕೆ ಸ್ವೀಕರಿಸುತ್ತಾರೆ. ಮುಂದಿನ ಗ್ರಾಮಗಳಿಗೆ ತೆರಳುತ್ತಾ ಎಲ್ಲ ಗುಡ್ಡರು ಮುಡುಕುತೊರೆಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಬಳಿ ಶಿವರಾತ್ರಿಯಂದು ಬಂದು ಸೇರುತ್ತಾರೆ. ಇಲ್ಲಿಂದ ಇವರ ಪ್ರಯಾಣ ಆರಂಭವಾಗುತ್ತದೆ.