ಸದಸ್ಯರಾದ ಶಿವಪುತ್ರಪ್ಪ ಮನ್ಮಿ, ಸಿದ್ದರಾಮಪ್ಪ ಗಣಾಚಾರಿ, ರೆಹಮತ್ ಜಾಗೀರದಾರ, ಹನುಮಂತ ವಡ್ಡರ, ಬಸವರಾಜ ವಾಳಿ ಮಾಹಿತಿ ನೀಡಿ, ‘ಪುರಸಭೆಯಲ್ಲಿ ಹಳೆಯ ಪರಿಕರಗಳು ಮತ್ತಷ್ಟು ಹಾಳಾಗುತ್ತಿವೆ. ಅವುಗಳನ್ನು ಹರಾಜು ಮಾಡಬೇಕು’ ಎಂದರು.
ಹಿರಿಯ ಆರೋಗ್ಯ ನಿರೀಕ್ಷಕ ಮಹಾವೀರ ಠಕಾಳೆ ಸಭೆಗೆ ಮಾಹಿತಿ ನೀಡಿ, ‘ಸದಸ್ಯರು ತಮ್ಮ ವಾರ್ಡ್ನಲ್ಲಿ ಸ್ವಚ್ಛತೆ ಬಗ್ಗೆ ಸಮಸ್ಯೆಯಿದ್ದರೆ ಮಾಹಿತಿ ನೀಡಬೇಕು’ ಎಂದು ಕೋರಿದರು.