ಮಾರಿಯಮ್ಮನಗರ, ಮಂಡಿಪೇಟೆ ದೊಡ್ಡ ಚರಂಡಿ, ಶಾಂತಿ ಹೋಟೆಲ್ ಹಿಂಭಾಗ, ಗುಬ್ಬಿ ವೀರಣ್ಣ ಕಲಾ ಕ್ಷೇತ್ರ ಹಿಂಭಾಗ, ಬೆಳಗುಂಬ ರಸ್ತೆಯ ಬೀದಿ ಬದಿ ವಾಸಿಗಳು, ಅಮಾನಿಕೆರೆ ಸ್ಥಳಾಂತರದ ವಾಸಿಗಳು, ಮರಳೂರು ಜನತಾ ಕಾಲೊನಿ, ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಗಿರುವ ನಿವಾಸಿಗಳು, ಕೊಳಚೆ ಪ್ರದೇಶದ ಸ್ಥಳಾಂತರವಾದ ಫಲಾನುಭವಿಗಳು, ಆಟೊ ಚಾಲಕರು, ಅಂಗವಿಕಲ ಫಲಾನುಭವಿಗಳನ್ನು ಗುರುತಿಸಿ ಅನುಮೋದಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.