ಮದ್ಯಪಾನ ನಿಷೇಧ ಮಾಡುತ್ತೇನೆ. ಜನಪ್ರತಿನಿಧಿಯಾಗಲು ಕನಿಷ್ಠ ವಿದ್ಯಾರ್ಹತೆ ಕಾಯ್ದೆ ಅನುಷ್ಠಾನಕ್ಕೆ ತರುತ್ತೇನೆ. ಬಡವರಿಗೆ ಮೂಲಸೌಕರ್ಯ ಒದಗಿಸುತ್ತೇನೆ. ಮೀಸಲಾತಿ ನೀಡಲು ನಿರ್ದಿಷ್ಟ ಮಾನದಂಡ ಅನುಸರಿಸುತ್ತೇನೆ. ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸುತ್ತೇನೆ.
ಪರಿಸರ ರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ. ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ವಾಹನ, ಆಸ್ತಿ ಹೊಂದಲು ಮಿತಿ ಹೇರುತ್ತೇನೆ. ಮನೆಗೊಂದು ಮರ ನೆಡಬೇಕೆಂಬ ನಿಯಮ ತರುತ್ತೇನೆ. –ಜಯಕುಮಾರ ದೇಸಾಯಿ ಕಾಡ್ಲೂರು, ರಾಯಚೂರು