ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರಿಂಗ್ (ಇಂಡಿಯಾ) ನಗರದಲ್ಲಿ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
‘ಚೆನ್ನೈನ ರೆಡಾರ್ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಾಗುವ ಮಳೆಯ ಬಗ್ಗೆ ಮೂನ್ಸೂಚನೆ ನೀಡಲಾಗುತ್ತಿದೆ. ಆದರೆ, 300 ಕಿ.ಮೀ.ಗಿಂತ ದೂರದ ಸ್ಥಳಗಳ ಹವಾಮಾನ ಬದಲಾವಣೆಯನ್ನು ನಿಖರವಾಗಿ ಗ್ರಹಿಸಲು ರೆಡಾರ್ಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ರಾಜ್ಯದ ಕೆಲವಡೆ ಇವುಗಳನ್ನು ಸ್ಥಾಪಿಸಿದರೆ ಹವಾಮಾನ ಬದಲಾವಣೆ ಬಗ್ಗೆ ರೈತರಿಗೆ ನಿಖರವಾದ ಮಾಹಿತಿ ನೀಡಬಹುದು’ ಎಂದರು.