ಆಲ್ರೌಂಡರ್ ಕ್ರಿಕೆಟಿಗ ಪಾಂಡ್ಯ ಡಿಸೆಂಬರ್ 26, 2017 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಟ್ವೀಟ್ ಪ್ರಕಟಿಸಿದ್ದರು. ಈ ಟ್ವೀಟ್ ಖಂಡಿಸಿ ರಾಜಸ್ಥಾನದ ಡಿ. ಆರ್. ಮೇಘವಾಲ್ ಎಂಬುವರು ದೂರು ದಾಖಲಿಸುವಂತೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಮೇಘವಾಲ್ ತಮ್ಮ ದೂರು ಅರ್ಜಿಯಲ್ಲಿ ಪಾಂಡ್ಯ ಅವರು ‘ಒಂದು ಸಮುದಾಯದ ಜನರ ಭಾವನೆಗಳನ್ನು ಘಾಸಿಗೊಳಿಸಿರುವುದಲ್ಲದೆ, ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಹೇಳಿದ್ದರು.
"ಯಾವ ಅಂಬೇಡ್ಕರ್??? ಅಸಮರ್ಪಕ ಕಾನೂನುಗಳ ಸಂವಿಧಾನವನ್ನು ರಚಿಸಿದವರೊ ಅಥವಾ ದೇಶದಲ್ಲಿ ಮೀಸಲಾತಿ ಎಂಬ ರೋಗ ಹರಡಲು ಕಾರಣರಾದವರೆ?" ಎಂದು ಪಾಂಡ್ಯ ಟ್ವೀಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.