ರಾಂಪುರ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವ ರಾಸುಗಳಿಗೆ ಬುಧವಾರದಿಂದಲೇ ಚಿಕಿತ್ಸೆ ಆರಂಭಿಸುವುದಾಗಿ ಲಕ್ಷ್ಮೀಕಾಂತ್ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಂಠು, ಮೋಹನಕುಮಾರ್, ಯೋಗೇಶ್, ಅಭಿಷೇಕ್, ಸ್ವಾಮಿಗೌಡ, ರವಿಕುಮಾರ್, ಮಂಜು ಇದ್ದರು.
**
ಪಶುಭಾಗ್ಯ ಇತರ ಯೋಜನೆಗಳಡಿ ರಾಂಪುರ ಗ್ರಾಮಕ್ಕೆ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ
–ಬಿ.ಎಸ್.ವಾಸು, ತಾ.ಪಂ ಸದಸ್ಯ
**
ನೇರಲಕೆರೆ, ಕೆ.ಶೆಟ್ಟಹಳ್ಳಿ, ಗಾಮನಹಳ್ಳಿಗಳಲ್ಲಿ ರಾಸುಗಳಿಗೆ ಅನಾರೋಗ್ಯ ಉಂಟಾಗಿದ್ದು, ಲಭ್ಯ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ
– ಡಾ.ಲಕ್ಷ್ಮೀಕಾಂತ್, ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ