ಕಳೆದ ವರ್ಷ ಬಂಡಿಪುರ ರಾಷ್ಟ್ರೀಯ ಉದ್ಯಾನದ ಬಹುತೇಕ ಕೆರೆಗಳು ಬತ್ತಿ ಹೋಗಿದ್ದರಿಂದ ವನ್ಯಜೀವಿಗಳು ನೀರಿಗೆ ಪರಿತಪಿಸುವಂತಾಗಿತ್ತು. ನೀರಿನ ಹೊಂಡಗಳಿಗೆ ಈ ಮೊದಲು ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು. ಬಳಿಕ ಹ್ಯಾಂಡ್ ಪಂಪ್ಗಳನ್ನು ಅಳವಡಿಸಿ ನೀರು ಹರಿಸಲಾಗುತಿತ್ತು. ಆದರೆ, ಆನೆಗಳು ಈ ಹ್ಯಾಂಡ್ ಪಂಪ್ಗಳನ್ನು ಧ್ವಂಸಗೊಳಿಸುತ್ತಿದ್ದವು. ಅರಣ್ಯದಲ್ಲಿ ವಿದ್ಯುತ್ ಅಳವಡಿಕೆ ಅಪಾಯದ ಕೆಲಸ. ಈ ಕಾರಣ ಅರಣ್ಯ ಇಲಾಖೆಯು ಸೌರಶಕ್ತಿ ಮೊರೆ ಹೋಗಿದ್ದು, ಇದರಿಂದ ನೀರಿನ ಹೊಂಡಗಳ ಪುನಶ್ಚೇತನ ಸುಲಭವಾಗಿದೆ. ಸೌರಶಕ್ತಿ ಫಲಕಗಳಿಗೆ ಹಾನಿಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.