ಆಸ್ಪತ್ರೆಯ ವೈದ್ಯ ಎಸ್.ರಘುನಂದನ ಮಾತನಾಡಿ, ಮಹದೇವು ಅವರ ಬಲಗಾಲನ್ನು ಮೊದಲು ಚಿಕಿತ್ಸೆಗೆ ಒಳಪಡಿಸಿದಾಗ ಪರಿಕರಗಳ ಕೊರತೆ ಇತ್ತು. ಹೀಗಾಗಿ ಪೂರ್ಣಪ್ರಮಾಣದ ಯಶಸ್ಸು ಸಾಧ್ಯವಾಗಲಿಲ್ಲ. ಈಗ ಸಕಲ ಸಿದ್ಧತೆಯೊಂದಿಗೆ ಎಡಗಾಲಿಗೆ ಚಿಕಿತ್ಸೆ ನೀಡಿ ಯಶಸ್ಸು ಸಾಧಿಸಿದ್ದೇವೆ. ₹ 3 ಲಕ್ಷ ಖರ್ಚಾಗುತ್ತಿದ್ದ ಚಿಕಿತ್ಸೆಯನ್ನು ಕೇವಲ ₹ 60 ಸಾವಿರದಲ್ಲಿ ನೀಡಲಾಗಿದೆ ಎಂದರು.