ಹನುಮಂತಪ್ಪ, ಮರ್ತುಜಾಸಾಬ ಬಾಗವಾನ ಒಂದು ಎಕರೆಯಲ್ಲಿ ಬದನೆ, ಒಂದು ಎಕರೆಯಲ್ಲಿ ಟೊಮೆಟೊ, ಅರ್ಧ ಎಕರೆ ಪಾಲಕ ಹಾಕಿದ್ದಾರೆ. ಎರಡು ಬಾರಿ ಕ್ರಿಮಿನಾಶಕ, ಗೊಬ್ಬರ ನೀಡಿದ್ದರಿಂದ ಉತ್ತಮ ರೀತಿಯಲ್ಲಿ ಇಳುವರಿ ಬಂದಿದೆ. ಆದರೆ, ಬೆಲೆ ನೆಲಕಚ್ಚಿದೆ.‘ಸುಮಾರು ₹40 ಸಾವಿರ ಖರ್ಚಾಗಿದೆ. ಬದನೆಕಾಯಿಗಳನ್ನು ದನಗಳಿಗೆ ಹಾಕುತ್ತಿದ್ದೇವೆ’ ಎಂದು ಹನುಮಂತಪ್ಪ ಮಾವಿನಇಟಗಿ ಗೋಳು ತೋಡಿಕೊಂಡರು.
ಟೊಮೆಟೊ ಬಿಡಿಸಿ ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಸಿಗದಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರು ಬಿಡಿಸುವುದನ್ನು ಬಿಟ್ಟಿದ್ದಾರೆ.