ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದೆ. ಆದ್ದರಿಂದ ಏ.10 ರವರೆಗೆ ನೀರು ಹರಿಸುವಂತೆ ಹುಣಸಗಿ ತಹಶೀಲ್ದಾರ್ ಸುರೇಶ ಚವಲ್ಕರ್ಗೆ ಹಸಿರು ಸೇನೆ ಮನವಿ ಸಲ್ಲಿಸಿತು.
ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ, ರುದ್ರಪ್ಪ ಮೇಟಿ, ವಾಲು ನಾಯಕ ಕುಪ್ಪಿ ತಾಂಡ, ಬಸವರಾಜ ಬೂದಿಹಾಳ, ಶರಣಮ್ಮ ಬೂದಿಹಾಳ, ಅಮರಯ್ಯ ಮದ್ದಾನಿ ಮಠ, ಮಹಾದೇವಪ್ಪ ಬೂದಿಹಾಳ, ಶಿವಲಿಂಗಯ್ಯ ಬೇವಿನಾಳಮಠ, ಬಸವರಾಜ ಚನ್ನೂರ, ಬಸವರಾಜ ಹಗರಟಗಿ, ಸೇರಿದಂತೆ ಇತರರು ಇದ್ದರು.