ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗಲಿದ್ದು, ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಿಗಲಿದ್ದು, ಮತ್ತು ಕೃಷಿಗೆ ಅನುಕೂಲವಾಗಲಿದೆ’ ಎಂದು ಬಳೂರ್ಗಿ ಗ್ರಾಮದ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಅರವಿಂದ ಎಸ್ ದೊಡ್ಡಮನಿ, ಟಿಎಪಿಸಿಎಂ ಮಾಜಿ ಅಧ್ಯಕ್ಷ ಹನುಮಯ್ಯ ಗುತ್ತೇದಾರ, ಎಪಿಎಂಸಿ ನಿರ್ದೇಶಕ ಫಲಾಲಸಿಂಗ್ ರಾಠೋಡ ಹೇಳುತ್ತಾರೆ.
**
ಭೀಮಾ ಜಲಾಶಯದಿಂದ ತಾಲ್ಲೂಕಿನ 10 ಕೆರೆ ಹಾಗೂ ಆಳಂದ ತಾಲ್ಲೂಕಿನ ಅಮರ್ಜಾಗೆ ನೀರು ತುಂಬುವ ಯೋಜನೆ ಅನುಮೋದನೆ ಪಡೆದಿದ್ದು, ಈ ಭಾಗದವರಿಗೆ ಅನುಕೂಲವಾಗಲಿದೆ
– ಮಾಲೀಕಯ್ಯ ಗುತ್ತೇದಾರ, ಶಾಸಕ