ಕಾಂಗ್ರೆಸ್ ಅಧ್ಯಕ್ಷರಾಗಿ ತಾವು ಮುಂದುವರೆಯುತ್ತಿರುವುದರ ಸಂಬಂಧದಲ್ಲಿ ಶಂಕೆ ಸೂಚಿಸಿ ಪ್ರಕಟವಾದ ವರದಿಗಳಿಗೆ ಮತ್ತು ಎದ್ದ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕಿದ ಶ್ರೀ ನಿಜಲಿಂಗಪ್ಪನವರು ‘ಇದರ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುವುದು ನನಗೆ ಬೇಡವಾಗಿದೆ. ನಾನು (ದೆಹಲಿಗೆ) ಹೋಗಲೇಬೇಕಾಗುತ್ತದೆ, ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದರು. ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ಅಧಿವೇಶನ ಮುಗಿಯುವ ನಿರೀಕ್ಷೆಯಿದೆ.