ವಿಜಯಪುರ: ಸ್ವಚ್ಛತೆ ಕಾಣದ ಕಿಷ್ಕಿಂಧೆಯಂತಹ ಊರಿನ ಬೀದಿಗಳು, ಕುಡಿಯುವ ನೀರಿಗಾಗಿ ಜನರ ಪರದಾಟ, ಒಳಚರಂಡಿ ಅವ್ಯವಸ್ಥೆ, ಸೊಳ್ಳೆಗಳ ಕಾಟ, ಆಸನ ವ್ಯವಸ್ಥೆ ಇಲ್ಲದ ಬಸ್ ನಿಲ್ದಾಣ, ಮಾರುಕಟ್ಟೆಗಾಗಿ ರೈತರ ಸೆಣಸಾಟ ಇಲ್ಲಿನ ಜನರ ನಿತ್ಯ ಸಂಕಷ್ಟ ಎಂದು ಸ್ಥಳೀಯ ನಿವಾಸಿಗಳಾದ ಸೋಮಶೇಖರ್, ಅರುಣ್ ಬಾಬು, ಲೊಕೇಶ್ ಗೌಡ, ಪರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.