ಅಲ್ಲದೆ ಪ್ರವೇಶ ದ್ವಾರ ಗೇಟ್ ಬಂದ್ ಮಾಡಿ ಪ್ರವಾಸಿಗರು ಒಳಗೆ ಬರದಂತೆ ತಡೆದರು. ಸೋಮವಾರಪೇಟೆ ತಾಲ್ಲೂಕು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀಬ್ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ಲೋಕೇಶ್, ರಾಕೇಶ್, ರಾಜೇಶ್, ಕುಟ್ಟಪ್ಪ, ಪವನ್, ನವೀನ್, ನಾಣಯ್ಯ, ವಿನು ಅವರನ್ನು ತಂಡವಾಗಿ ರಚಿಸಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.