ಬಾಗೇಪಲ್ಲಿ, ಹೊಸಹುಡ್ಯ, ನಾರೇಪಲ್ಲಿ, ಆದೇಪಲ್ಲಿ, ಘಂಟಂವಾರಿಪಲ್ಲಿ ಗ್ರಾಮಗಳ 460 ಮಹಿಳೆಯರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ಪಾದನೆ ಇಳಿಮುಖವಾದ ಕಾರಣ ಗಾರ್ಮೆಂಟ್ ಸ್ಥಳಾಂತರವಾಗುತ್ತಿದೆ. ಆದರೆ ಇದನ್ನೇ ನಂಬಿದ್ದ ಕಾರ್ಮಿಕರ ಬದುಕು ಬೀದಿ ಪಾಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಚನ್ನರಾಯಪ್ಪ ಗಾರ್ಮೆಂಟ್ ಅಧಿಕಾರಿಗಳ ಜತೆ ಚರ್ಚಿಸಿದರು.