ನವದೆಹಲಿ: ಮಹಾರಾಷ್ಟ್ರದ ಅಮರಾವತಿ ಭಾಗದ ಶಾಸಕಿ ಯಶೋಮತಿ ಠಾಕೂರ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯ
ದರ್ಶಿಯಾಗಿ ಶನಿವಾರ ನೇಮಕ ಮಾಡಲಾಗಿದೆ.
ಕರ್ನಾಟಕದ ಉಸ್ತುವಾರಿ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜತೆಗೆ ಠಾಕೂರ್ ಕಾರ್ಯನಿರ್ವಹಿಸಲಿದ್ದಾರೆ.
ಮರಾಠಿ ಭಾಷಿಕರು ಹೆಚ್ಚಾಗಿರುವ ಮುಂಬೈ–ಕರ್ನಾಟಕ ಭಾಗದಲ್ಲಿ ಠಾಕೂರ್, ಪಕ್ಷದ ಚಟುವಟಿಕೆಗಳ ನಿಗಾ ವಹಿಸಲಿದ್ದಾರೆ. ಈಚೆಗೆ ಮೇಘಾಲಯ
ದಲ್ಲಿ ನಡೆದ ಚುನಾವಣೆಯಲ್ಲಿ ಸಹ ಸಮನ್ವಯಕಾರರಾಗಿ ಅವರು ಕೆಲಸ ಮಾಡಿದ್ದರು.