ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ವಿದ್ಯಾಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಪೃಥ್ವೀಶ್ ಮಾತನಾಡಿ, ಬುದ್ದಿಮಾಂದ್ಯ ಅಥವಾ ಭೌದ್ಧಿಕ ಬೆಳವಣಿಗೆಯ ಅಸ್ವಸ್ಥತೆ ನರ ಸಂಬಂಧಿ ಕಾಯಿಲೆಯಾಗಿದೆ. ವಯಸ್ಸಿಗೆ ತಕ್ಕಂತೆ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆ ಇಲ್ಲದಿರುವುದು ಬುದ್ಧಿಮಾಂದ್ಯ ಲಕ್ಷಣಗಳು. ಗ್ರಾಮೀಣ ಭಾಗಗಳಲ್ಲೇ ಇದು ಹೆಚ್ಚಾಗಿ ಕಂಡು ಬರುತ್ತದೆ ಎಂದು ತಿಳಿಸಿದರು.ಗರ್ಭಧಾರಣೆಯ ಮೊದಲ 2 ತಿಂಗಳಿನಲ್ಲಿ ಗರ್ಭಿಣಿಗೆ ವೈರಸ್ ಸೊಂಕು ಉಂಟಾಗುವುದರಿಂದ ಭ್ರೂಣದ ಮೆದುಳಿಗೆ ಹಾನಿಯುಂಟಾಗುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸದಿರುವುದು, ವೈದ್ಯಕೀಯ ಮಾರ್ಗದರ್ಶನ ಇಲ್ಲದೆ ಔಷಧಿಗಳನ್ನು ಉಪಯೋಗಿಸುವುದು, ಆಯೋಡಿನ್ ಕೊರತೆ ಬುದ್ಧಿಮಾಂದ್ಯತೆಗೆ ಕಾರಣಗಳು ಎಂದು ಹೇಳಿದರು.