ಈ ಪ್ರಕರಣದಲ್ಲಿ ಜಯಸಿಂಹ ಹಾಗೂ ಅವರ ಸಹಾಯಕ ನಂಜಪ್ಪ ಅವರಿಗೆ ಕೋರ್ಟ್ ಐದು ವರ್ಷಗಳ ಶಿಕ್ಷೆ ವಿಧಿಸಿದೆ. ಇಬ್ಬರೂ ಜೈಲಿನಲ್ಲಿ ಇದ್ದಾರೆ. ಜಾಮೀನು ಕೋರಿ ಇಬ್ಬರೂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಮಾನ್ಯ ಮಾಡಿದೆ. ತಲಾ ₹2 ಲಕ್ಷ ಭದ್ರತಾ ಬಾಂಡ್ ನೀಡಲು ಕೋರ್ಟ್ ಆದೇಶಿಸಿದೆ. ₹165 ಕೋಟಿಗೂ ಅಧಿಕ ಮೌಲ್ಯದ ನಕಲಿ ಛಾಪಾ ಕಾಗದ ತಯಾರಿಸಲು ತೆಲಗಿಗೆ ಸಹಾಯ ಮಾಡಿ
ರುವುದು ಸಾಬೀತಾಗಿರುವ ಕಾರಣ, ಶಿಕ್ಷೆ ವಿಧಿಸಲಾಗಿದೆ. 2017ರ ಆಗಸ್ಟ್ 3ರಂದು ತೆಲಗಿ ಮೃತಪಟ್ಟಿದ್ದಾನೆ.